ಭಾರತದ ಪ್ರಾಚೀನ ಇತಿಹಾಸ -'ಭಾರತೀಯ ಇತಿಹಾಸದ ಆಧಾರಗಳು'
'ಭಾರತೀಯ ಇತಿಹಾಸದ ಆಧಾರಗಳು'
ಇತಿಹಾಸವನ್ನು ರಚಿಸಲು ಅಥವಾ ಪುನರ್ರಚಿಸಲು ಪುರಾವೆಗಳು ಬಹಳ ನಿರ್ಣಾಯಕ ಪಾತ್ರವನ್ನು ಹೊಂದಿವೆ.
ಇತಿಹಾಸವನ್ನು ರಚಿಸಲು ಅಥವಾ ಪುನರ್ರಚಿಸಲು ಬಳಸುವ ವಿವಿಧ ಆಕರಗಳನ್ನು ಎರಡು ಮುಖ್ಯ ಭಾಗಗಳಾಗಿ ವಿಂಗಡಿಸಿದೆ:
1. ಬರವಣಿಗೆಯ ಆಧಾರಗಳು
ಇವುಗಳನ್ನು ದೇಶೀಯ ಮತ್ತು ವಿದೇಶಿ ಬರವಣಿಗೆಗಳೆಂದು ವಿಭಾಗಿಸಲಾಗಿದೆ:
ದೇಶೀಯ ಬರವಣಿಗೆಗಳು: ಇದರಲ್ಲಿ ಧಾರ್ಮಿಕ ಮತ್ತು ಲೌಕಿಕ ಸಾಹಿತ್ಯ ಸೇರಿದೆ.
ಅಷ್ಟಾಧ್ಯಾಯ-ಪಾಣಿನಿ
ಅರ್ಥಶಾಸ್ತ್ರ-ಕೌಟಿಲ್ಯ
ಮುದ್ರಾರಾಕ್ಷಸ-ವಿಶಾಖದತ್ತ
ಬೃಹತ್ಕಥಾ ಮಂಜರಿ-ಕ್ಷೇಮೇಂದ್ರ
ಮಹಾಭಾಷ್ಯ-ಪತಂಜಲಿ
ಮಾಲವಿಕಾಗ್ನಿಮಿತ್ರ-ಕಾಳಿದಾಸ
ನೀತಿಸೂತ್ರ-ಕಮಂಡಕ
ದೇವಿಚಂದ್ರಗುಪ್ತ-ವಿಶಾಖದತ್ತ
ಮೃಚ್ಛಕಟಿಕ-ಶೂದ್ರಕ
ದಶಕುಮಾರಚರಿತ-ದಂಡಿ
ಕಥಾ ಸರಿತ್ಸಾಗರ-ಸೋಮದೇವ
ಹರ್ಷಚರಿತೆ-ಬಾಣಭಟ್ಟ
ವಾಕ್ಪತಿ-ಗೌಡವಾಹೋ
ವಿಕ್ರಮಾಂಕ ದೇವ ಚರಿತೆ-ಬಿಲ್ಹನ
ಪ್ರಥ್ವಿರಾಜ್ ವಿಜಯ್-ಜಯಂಕ
ರಾಜತರಂಗಿಣಿ-ಕಲ್ಹಣ (ಕಾಶ್ಮೀರದ ಇತಿಹಾಸ)
ಪ್ರಥ್ವಿರಾಜ್ ರಾಸೋ-ಚಾಂದ ಬರ್ಧಾಯಿ
ವೈದಿಕ ಸಾಹಿತ್ಯ: ನಾಲ್ಕು ವೇದಗಳು (ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ), ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳು, ವೇದಾಂಗಗಳು ಮತ್ತು ಪುರಾಣಗಳು.
ಬೌದ್ಧ ಸಾಹಿತ್ಯ: ತ್ರಿಪಿಟಕಗಳು (ವಿನಯ, ಸುತ್ತ ಮತ್ತು ಅಭಿದಮ್ಮ ಪೀಟಕಗಳು), ದೀಪವಂಶ, ಮಹಾವಂಶ ಇತ್ಯಾದಿ.
ಜೈನ ಸಾಹಿತ್ಯ: ಅಂಗಗಳು ಮತ್ತು ಉಪಾಂಗಗಳು (ಪ್ರಾಕೃತ ಭಾಷೆಯಲ್ಲಿವೆ).
ಐತಿಹಾಸಿಕ ಬರವಣಿಗೆಗಳು: ಕೌಟಿಲ್ಯನ 'ಅರ್ಥಶಾಸ್ತ್ರ', ವಿಶಾಖದತ್ತನ 'ಮುದ್ರಾರಾಕ್ಷಸ', ಕಲ್ಹಣನ 'ರಾಜತರಂಗಿಣಿ' (ಕಾಶ್ಮೀರದ ಇತಿಹಾಸ), ಬಾಣಭಟ್ಟನ 'ಹರ್ಷಚರಿತ' ಇತ್ಯಾದಿ.
ವಿದೇಶಿ ಬರವಣಿಗೆಗಳು: ಭಾರತಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ವರದಿಗಳು.
ಹೆರೊಡೋಟಸ್-ಹಿಸ್ಟೋರಿಕಾ
ಮೆಗಸ್ತನೀಸನ 'ಇಂಡಿಕಾ',
ಫಾಹಿಯಾನ್ ಬರಹಗಳು
ಹ್ಯುಯೆನ್ ತ್ಸಾಂಗ್ ಅವರ 'ಸಿ-ಯೂ-ಕಿ' ಮತ್ತು
ಅಲ್-ಬೆರೂನಿಯ 'ತಾರಿಖ್-ಅಲ್-ಹಿಂದ್'.
2. ಪುರಾತತ್ವ ಆಧಾರಗಳು
ಇವು ಭೂಮಿಯ ಅಗೆಯುವಿಕೆಯಿಂದ ಅಥವಾ ಮೇಲ್ಮೈಯಲ್ಲಿ ದೊರೆತ ಭೌತಿಕ ಪುರಾವೆಗಳಾಗಿವೆ:
ಭೂ ಉತ್ಖನನಗಳು : ಹರಪ್ಪ, ಮೊಹೆಂಜೋದಾರೋ, ತಕ್ಷಶಿಲೆ ಮತ್ತು ಬ್ರಹ್ಮಗಿರಿಯಂತಹ ಸ್ಥಳಗಳಲ್ಲಿ ನಡೆದ ಸಂಶೋಧನೆಗಳು ನಾಗರಿಕತೆಯ ಪ್ರಾಚೀನತೆಯನ್ನು ತಿಳಿಸುತ್ತವೆ.
ಶಾಸನಗಳು : ಇವುಗಳನ್ನು ಇತಿಹಾಸದ ಅತ್ಯಂತ ನಂಬಲರ್ಹ ಆಧಾರಗಳೆಂದು ಪರಿಗಣಿಸಲಾಗಿದೆ.
ಅಶೋಕನ ಶಾಸನಗಳು: ಭಾರತದಾದ್ಯಂತ ದೊರೆತಿರುವ ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿಯ ಶಾಸನಗಳು.
ಪ್ರಮುಖ ಶಾಸನಗಳು: ಹಾಥಿಗುಂಫಾ ಶಾಸನ (ಖಾರವೇಲ), ಅಲಹಾಬಾದ್ ಸ್ತಂಭ ಶಾಸನ (ಸಮುದ್ರಗುಪ್ತ), ಐಹೊಳೆ ಶಾಸನ (ಇಮ್ಮಡಿ ಪುಲಿಕೇಶಿ - ರವಿಕೀರ್ತಿ ವಿರಚಿತ).
ನಾಣ್ಯಗಳು : ನಾಣ್ಯಗಳ ಅಧ್ಯಯನವನ್ನು 'ನ್ಯೂಮಿಸ್ಮ್ಯಾಟಿಕ್ಸ್' ಎನ್ನಲಾಗುತ್ತದೆ.
ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು ಅಂದಿನ ರಾಜರ ಆರ್ಥಿಕ ಸ್ಥಿತಿ, ಸಾಮ್ರಾಜ್ಯದ ವ್ಯಾಪ್ತಿ ಮತ್ತು ವ್ಯಾಪಾರ ಸಂಬಂಧಗಳನ್ನು (ಉದಾಹರಣೆಗೆ ರೋಮ್ ಜೊತೆಗಿನ ವ್ಯಾಪಾರ) ವಿವರಿಸುತ್ತವೆ.
ಸ್ಥಳ - ಸಂಶೋಧಕರು
ಹರಪ್ಪ-ದಯಾರಾಮ್ ಸಾಹ್ನಿ (1921)
ಮೊಹೆಂಜೋದಾರೋ-ಆರ್.ಡಿ. ಬ್ಯಾನರ್ಜಿ (1922)
ನಳಂದ ಮತ್ತು ತಕ್ಷಶಿಲಾ-ಡಾ.ಸ್ಪೂನರ್
ಪಾಟಲಿಪುತ್ರ (ಪಟ್ನಾ)-ಡಾ.ಸ್ಪೂನರ್
ನರ್ಮದಾ ಮತ್ತು ಸಬರಮತಿ-ಡಾ.ಸಂಕಾಲಿಯಾ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ